Thursday, March 24, 2011

ಸಾವೆಂಬ ನೋವು



ಸಾವಿನ ಮನೆಯ ಮೂಲೆಯಲ್ಲಿ ಮುದುಡಿಕೂತು.....
ಅತ್ತಿತ್ತ ಬಿರುಸಾಗಿ ತಿರುಗಾಡುವ ಜನರನ್ನು ದಿಟ್ಟಿಸುತ್ತಾ...
ಅಲ್ಲಲ್ಲಿ ಗುಂಪು ಕಟ್ಟಿ ನಿಂತು ವಿಧಿಯನ್ನು ಶಪಿಸುತ್ತಾ..
ನಿಮಿಶಕ್ಕೊಂದರಂತೆ ಬಂದು ನಿಲ್ಲುವ ಗಾಡಿಯ ಶಬ್ದವನ್ನು ಆಲಿಸುತ್ತಾ...
ಮನದೊಳಗೆ ಕಡೆಯುವ ನೋವಿನ ಮೊಸರನ್ನು
ಅದರೊಟ್ಟಿಗೆ ಬಂದ ಕಣ್ಣೀರನ್ನು ತಡೆಯುತ್ತಾ..


ಒಬ್ಬರಾದ ಮೇಲೆ ಒಬ್ಬರಂತೆ ಸಮಾಧಾನ ಮಾಡುವ ಲೆಕ್ಕದಲ್ಲಿ
ಬಂದು ಹೋಗುವ ನೆಂಟರಿಷ್ಟರೂ.....
ಗೊತ್ತು ಗೊತ್ತಿಲ್ಲದೆಯೊ ಮನಸಿನ ನೋವನ್ನು ಮತ್ತೆ ಮತ್ತೆ ಕೆಣಕಿ
ಕಣ್ಣೀರಿನ ಮೊಡುವಲ್ಲಿ ತಾನಗಿಯೆ ಮತ್ತೆ ಮತ್ತೆ ಬೀಳಲು ಸಹಕರಿಸುವರು.
ಯಾರು ಎಷ್ಟೆ ಸಹಕರಿಸಿದರೂ ಸಮುದ್ರದಲ್ಲಿ ಮುಳುಗಿದ ಹಡಗಂತೆ..
ಕಳೆದು ಹೊದ ಜೀವವನ್ನು ಮತ್ತೆ ಮರಳಿ ತರಲಾಗದು...
ಒಮ್ಮೆ ಹಣೆಬರಹವನ್ನು ಬರೆದ ದೇವರೂ ಇನ್ನೊಮ್ಮೆ ತಿದ್ದಲು ಸಾದ್ಯವೇ?

2 comments: