Tuesday, March 29, 2011

ಮೆಜೆಸ್ಟಿಕ್

ಬಸ್ಸಿಗಾಗಿ ಮೆಜೆಸ್ಟಿಕ್ನಲ್ಲಿ ಕಾಯುತಿದ್ದಾಗ, ನಾನಲ್ಲೆ ಕುಳಿತಿದ್ದರೂ, ಮಾಯದ ಮನಸ್ಸು ಹೊರಜಗತ್ತಿನ ಆಚೆಗೆ
ಒಡಾಡುತಿದ್ದಾಗ ಬರೆಯಲ್ಪಟ್ಟ ಕವಿತೆ... ಈ ತರದ ಅನುಭವ ನಿಮಗೂ ಆಗಿರಬಹುದು.
ಕವಿತೆಯನ್ನು ಅವಲೋಕಿಸಿ ತಾಳೆ ನೋಡಿ.




ಸದ್ದು ಗದ್ದಲದ ನಡುವೆ..
ಮನಸಿನ ಭಾವದ ಒಳಗೆ../

ಎತ್ತಲೊ ಸಾಗಿದೆ ಯೊಚನ ಲಹರಿಯ ಗಾಳಿ..
ಅವಿತು ಕುಳಿತ ನೆನಪನ್ನು ಕೆದಕಿ/

ಪ್ರಜ್ನಾವಸ್ತೆಯ ಹೊರಗೆ ಗಿರಕಿ ಹಾಕಿದೆ,,,
ಒಳ ಜಾರಿದ ಗಾಳವಿಲ್ಲದ ಜಗತ್ತು//

No comments:

Post a Comment