Saturday, December 10, 2011
ನೀರಿನ ಗುಳ್ಳೆ
ಮನಸೆಂಬ ಮುಗಿಲಿನ
ಮಾಯದ ನಲಿವಿನ ಮಿಂಚಂತೆ
ಕಂಡೆ ನೀನು ಜಲಪಾತದ
ಬೋರ್ಗರೆವ ತೆರೆಯಲ್ಲಿನ ನೀರಿನ ಗುಳ್ಳೆಯಂತೆ..
ಅಲೆಯೋಳಗಿನ ಕಣ್ಣ ಮುಚ್ಚಾಲೆಯ
ನಿನ್ನ ಆಟವ ಕಂಡು ಮನಸೋತೆ
ನಿನ್ನೊಳಗೆ ಕೂತು ನಿನ್ನುಸಿರಾಗಿ
ನಿನ್ನ ಪರಿಧಿಯಲಿ ಸುಖವಾಗಿ ಕುಳಿತೆ
ನೀರಿನ ರಭಸಕ್ಕೆ ನುಸುಳಿ
ಕಲ್ಲಿನ ಸುಳಿಯಲ್ಲಿ ಸಿಲುಕಿ ನಿನೊಡೆದರೆ
ನಶ್ವರವಾಗೋ ಉಸಿರು
ನಿನ್ನೊಡಲ ಒಡತಿ ನನ್ನದೆನ್ನುವುದನ್ನ ಮರೆಯದಿರು,,,,,,,,,,,,,,,,ಗೆಳೆಯಾ ...
ನನ್ನುಸಿರೇ ನಿನಾಗಿರುವಾಗ ಇ ಉಸಿರೆಕೆ.....
ನಿನ್ನ ಬಳಿಯಲ್ಲೇ ಮುದುಡಿ
ನಿನ್ನ ತೋಳಲ್ಲಿ ಬರ ಸೆಳೆದು
ಕೊನೆತನಕ ನಿನ್ನ ಜೊತೆಯಲ್ಲೇ ನಿನ್ನನೆರಲಾಗಿರುವೆ
ಎಂದು ಪಿಸುಗುಡುವ ಬಯಕೆಯಾಗಿದೆ...
Tuesday, August 30, 2011
One night there was no light :) :)
ಎಲ್ಲೆಡೆ ತುಂಬಿತ್ತು
ಬರಿದಾದ ಕತ್ತಲು/
ಮೌನದ ಮಾತಿಗೆ
ಎಳೆ ಇಲ್ಲದಂತಾಗಿದೆ ಸುತ್ತಲು /
ಬೆಳಕಿನ ಕಿರಣವ
ದೂರದಿ ಕಣ್ಣು ಹುಡುಕುತಿರಲು/
ನಾನೀರುವೆ ಗೆಳತಿ ನಿನ್ನ ಜೊತೆ ಎಂದು
ಕಿಟಕಿಯಲ್ಲಿ ಇಣುಕಿತು
ಚಂದಮನ ಬೆಳದಿಂಗಳು .
Monday, June 13, 2011
ಬಾನಂಗಳದ ಬೇಳಕಿನಾಟ
ತಿಮಿರದ ಬಯಲಲಿ
ನಕ್ಷತ್ರಗಳ ಗೊಂಚಲು
ಚಂದದಿ ಚಂದ್ರಮ
ಬಿಳಿಮುಗಿಲಿಗೆ ಹಂಚಲು
ಪುಟ್ಟ ಕಂದನಂತೆ
ಭೂಮಿ ಮುದುಡಿ ಮಲಗಲು
ಬೆಚ್ಚಗೆ ಆವರಿಸಿತು
ಗಾಡವಾದ ಕತ್ತಲು... .
Tuesday, May 3, 2011
EVENING ಮಳೆ IN BANGLORE......
ಜೀನು ಜೀನು ಗೋ ಮಳೆಯಲಿ
ತೋಯ್ದು ತೋಪ್ಪೆಯಾಗದಂತೆ
ರಸ್ತೆಯಲ್ಲಿನ ಮಣ್ಣಿನ ನೀರಿನ ಮೇಲೆ
ಅಂಗಿಯ ಹಿಡಿದು ತುದಿ ಗಾಲಲ್ಲಿ
ನಿಧಾನವಾಗಿ ನಡೆದು ಹೋಗುವಾಗ ....
ಜೆರ್ ಎಂದು ಬಂದ ಕಾರು
ಕೊಚ್ಹೆ ನೀರನ್ನು ಎರಚಿ
ಮೈ ಎಲ್ಲ ಒದ್ದೆಯದಾಗ
ಮಳೆ ನೀರಿನಿಂದ ರಕ್ಷಣೆ ಪಡೆಯುವ
ಸಾಹಸವ ಬಿಟ್ಟ ನನಗೆ .........
ಬಾಲ್ಯದ ದಿನಗಳು ಮಿಂಚಿನಂತೆ
ಮನದಲ್ಲಿ ಗೆರೆ ಮೂಡಿ
ಮಾಯವಾಗೋ ಬದಲು
ಮನದಲ್ಲಿ ಮತ್ತೆ ಬಾಲ ಬುದ್ದಿಯನ್ನು ಬಿತ್ತಿ
ಮಳೆಯ ನೀರಲ್ಲಿ ಆಡೋ ಆಸೆಯನ್ನು ಮೂಡಿಸಿದವು
Saturday, April 30, 2011
Friday, April 29, 2011
ಪ್ರೀತಿ vs ತ್ಯಾಗ
ಅವನಿಗಾಗಿ ಕಾಯುವುದರಲ್ಲಿ
ಅವನನ್ನು ಕಾಯಿಸುವುದರಲ್ಲಿ ಸುಖವಿದೆ
ಇಂದು ನಾಳೆ ಎನ್ನದೆ, ಬರುವನೆಂದು ಕಾಯುವೆ
ಆದರೆ ರಾಮನಿಗಾಗಿ ಕಾದ ಸೀತೆಯಂತೆ
ವರ್ಷನು ಗಟ್ಟಲೆ ಅವನಿಗಾಗಿ ಕಾಯಲಾರೆ...
ಸೀತೆಯಂತೆ ಅಷ್ಟೊಂದು ದಿನ
ಕಾದು ಪರಿತಪಿಸದೆ
ವತ್ತಾಯ ಪೂರ್ವಕವಾಗಿ
ಅವನ ಆಗಮನವ ನೀರಿಕ್ಷಿಸುವೆ
ತ್ಯಾಗವೇ ಪ್ರೀತಿಯಾದರೆ
ಪ್ರೀತಿಯಾಕೆ ಬೇಕು??
ಎಲ್ಲರು ತ್ಯಾಗಿಗಳಾದರೆ
ಪ್ರೀತಿಸುವರಾರು ????
ಪ್ರೀತಿಯನ್ನು ತ್ಯಾಗಮಾಡಿ
ದೊಡ್ದವರೆನಿಸಿ ಕೊಳ್ಳುವುದಕಿಂತ
ಪ್ರೀತಿಯಲಿ ಸ್ವಾರ್ತಿಯಾಗಿ
ಪ್ರೀತಿಯನು ಜಯಿಸಿ ಕೊಳ್ಳುವುದು ಉತ್ತಮ.....
ಶ್ವಾಸ-ಆಶ್ವಾಸ
ಮನಸಿನ ಹಾದಿಯ ಸುಗಮ ದಾರಿಯ
ಅಂಚಿನ ನಲಿವಿನ ರಾಶಿಯಂತೆ
ಕದಡಿದ ಮನಕೆ ತಂಪೆರೆದ
ವರುಣನ ಕ್ರಪೆಯಂತೆ/
ವಸಂತ ಮಾಸದ ಕೋಗಿಲೆ
ಗಾನದ ಇಂಪು
ನನಸಿನ ಬಯಲಲಿ
ಕನಸಿನದೆ ಕಂಪು /
ಕಾದು ಕಾದು ಬವಣಿಸಿ ಕೊನೆಗೂ ...........
ಬಿಸಿ ಉಸಿರು ಕರಗಿ
ನಿಟ್ಟುಸಿರಿನ ಶ್ವಾಸ
ಅಲ್ಪವಿರಾಮದ ಬಯಕೆಯ ತುದಿಯ
ನಲಿವಿನ ಆಶ್ವಾಸ/
Thursday, April 28, 2011
ಹವ್ಯಕ ಪದ್ಯ..
(lifu istene style, pancharangi..)
only for havyakas :)
ಹವ್ಯಕ ಮಾಣಿಯಾಗಿ ಹುಟ್ಟಿ,
ತೋಟ ಗಿಟ ಮಾಡಿಕೊಂಡು,
ಹಂಗೂ ಹಿಂಗೂ ಕಾಸು ಇದ್ರು...ಕೂಸು ಸಿಕ್ತಿಲ್ಲೆ/
ಬೈಕು ಸೆಲ್ಲು ಲ್ಯಾಪ್ ಟೊಪ್ ಇದ್ರು,
ಆರಾಮಾಗಿ ಸೆಟ್ಟಲ್ ಆದ್ರು
ಅಪ್ಪ ಅಮ್ಮನ ಸಂತಿಗಿದ್ರು,,ಕೂಸು ಸಿಕ್ತಿಲ್ಲೆ/
ಸಂಬಳ ಕೊಡುವ ಕೆಲಸ ಇದ್ದು,
ಒಳ್ಳೆ ಮಾಣಿ ಹೆಸರು ಇದ್ದು,
ಚಟ ಗಿಟ ಇಲ್ಲಿಗಿದೆ ಇದ್ರು ಕೂಸು ಸಿಕ್ತಿಲ್ಲೆ...
ನಮ್ಮ ಹವ್ಯಕ ಬಂಧುಗಳoo ಚುರು ಹಿಂಗೆಯ
ಎಲ್ಲ ಬದಿಗು ಹುಡುಕ್ರು aste ಕೂಸು ಸಿಕ್ತಿಲ್ಲೆ,,,,
ಕುಮಟ ಕಾರವಾರ ಹೊನ್ನಾವರಾ
ಸಿರಸಿ ಸಿದ್ದಾಪುರ ಯಲ್ಲಪುರಾ
ಎಲ್ಲ ಕಡೆ ಜಾತಕ ಕೊಟ್ರು ಕೂಸು ಸಿಕ್ತಿಲ್ಲೆ..
ಅಂತು ಇಂತು ಜಾತಕ ಆದ್ರು,
ಕೂಸಿಗೆ ಮಾನಿ ಮನಸೆ ಇಲ್ಲೆ,,
ಪೇಟೆಲಿಪ್ಪು ಮಾಣಿನೆ ಬೇಕು ಅಂತು ಕೂಸು ಸಿಕ್ತಿಲೆ
ಊರಲ್ಲಿ ಆಳು ಕಾಳು ಇರ್ತೊ
ಬೆಂಗಳೂರಗಿಂತ ನಂಗಳೂರಲ್ಲೆ
ಆರಾಮಾಗಿ ಇಪ್ಪುಲಾದ್ರೂ ಕೂಸು ಸಿಕ್ತಿಲ್ಲೆ..
ಎಲ್ಲ ಸೇರಿ ವಿಚಾರ ಮಾಡಿ ಹಿಂಗೆ ಅಗ್ತಾ ಹೊದ್ರೆ ಕಡೆಗೆ
ಊರೆಲ್ಲ ಖಾಲಿಯಾಗಿ ನಮ್ಮ ತನನೆ ಇರ್ತಿಲ್ಲೆ...
Wednesday, April 27, 2011
ನೋವು
ಜೀವನದ ಸುಗಮ ಹಾದಿಯಲ್ಲಿ ಮುಳ್ಳೆಕೆ?
ಮನಸಿನ ಗೂಡಲ್ಲಿ ನೋವೇಕೆ?
ಮುಳ್ಳಿನ ಕೃಪೆಯಿಂದ ಗೆಳೆತನದ ನೈಜತೆಯ ದರ್ಶನ
ಮನದ ನೋವಿನ ಬ್ರಾಂತಿ ಇಂದ ಪ್ರೇಮ - ಒಲವಿನ ಸಿಂಚನ
ಆತ್ಮೀಯತೆ ಸನಿಹವಾಗಲು ಮುಳ್ಳಿನ ನೋವು ಬೇಕೆಂಬುದು ಸೋಜಿಗ
ಇವೆರಡೂ ಬದುಕಿನ ಸಾಕ್ಷ್ಯ ಚಿತ್ರದ ಕಾವಲುಗಾರರು ಎನ್ನುವುದಂತೂ ನಿಜ
Tuesday, March 29, 2011
ಮೆಜೆಸ್ಟಿಕ್
ಬಸ್ಸಿಗಾಗಿ ಮೆಜೆಸ್ಟಿಕ್ನಲ್ಲಿ ಕಾಯುತಿದ್ದಾಗ, ನಾನಲ್ಲೆ ಕುಳಿತಿದ್ದರೂ, ಮಾಯದ ಮನಸ್ಸು ಹೊರಜಗತ್ತಿನ ಆಚೆಗೆ
ಒಡಾಡುತಿದ್ದಾಗ ಬರೆಯಲ್ಪಟ್ಟ ಕವಿತೆ... ಈ ತರದ ಅನುಭವ ನಿಮಗೂ ಆಗಿರಬಹುದು.
ಕವಿತೆಯನ್ನು ಅವಲೋಕಿಸಿ ತಾಳೆ ನೋಡಿ.
ಸದ್ದು ಗದ್ದಲದ ನಡುವೆ..
ಮನಸಿನ ಭಾವದ ಒಳಗೆ../
ಎತ್ತಲೊ ಸಾಗಿದೆ ಯೊಚನ ಲಹರಿಯ ಗಾಳಿ..
ಅವಿತು ಕುಳಿತ ನೆನಪನ್ನು ಕೆದಕಿ/
ಪ್ರಜ್ನಾವಸ್ತೆಯ ಹೊರಗೆ ಗಿರಕಿ ಹಾಕಿದೆ,,,
ಒಳ ಜಾರಿದ ಗಾಳವಿಲ್ಲದ ಜಗತ್ತು//
ಒಡಾಡುತಿದ್ದಾಗ ಬರೆಯಲ್ಪಟ್ಟ ಕವಿತೆ... ಈ ತರದ ಅನುಭವ ನಿಮಗೂ ಆಗಿರಬಹುದು.
ಕವಿತೆಯನ್ನು ಅವಲೋಕಿಸಿ ತಾಳೆ ನೋಡಿ.
ಸದ್ದು ಗದ್ದಲದ ನಡುವೆ..
ಮನಸಿನ ಭಾವದ ಒಳಗೆ../
ಎತ್ತಲೊ ಸಾಗಿದೆ ಯೊಚನ ಲಹರಿಯ ಗಾಳಿ..
ಅವಿತು ಕುಳಿತ ನೆನಪನ್ನು ಕೆದಕಿ/
ಪ್ರಜ್ನಾವಸ್ತೆಯ ಹೊರಗೆ ಗಿರಕಿ ಹಾಕಿದೆ,,,
ಒಳ ಜಾರಿದ ಗಾಳವಿಲ್ಲದ ಜಗತ್ತು//
Sunday, March 27, 2011
ಒಲವಿನ ಕನಸು
ನದಿಯ ಅಲೆಯ
ಪ್ರಶಾಂತವಾದ ನಾದದಲ್ಲಿ,
ಮುಸ್ಸಂಜೆಯ ತಂಗಾಳಿಯ
ಊಸಿರಿನ ಆಹ್ಲಾದತೆಯಲ್ಲಿ...
ಮಧುರ ಯಾತನೆಯ
ಮೈ ಅರಳಿಸುವ ಒಲವಿನಲ್ಲಿ,
ದಡದ ಅಂಚಿಗೆ
ಕಂಡು ಕಾಣದಂತೆ..
ಕಾಯುತ ನಿಂತಿರುವ ನಿನ್ನ
ಜೀವವ ನೆನೆದು...
ನಿನ್ನ ಬಳಿ ಪಿಸುನುಡಿಯಲೆಂದು
ಓಡೊಡಿ ಬಂದ ನನಗೆ!!
ಕಾಲುಜಾರಿ ಮೈ ನರಳಿ
ಕಣ್ ಬಿಟ್ಟಾಗ..
ಎದ್ದೇಳು ಮಗು, ಕೆಲಸಕ್ಕೆ
ಹೋಗೊ ಸಮಯವಾಯಿತೆಂಬ..
ಅಮ್ಮನ ಕೂಗೇ ಹಿಂಸೆಯಾಯಿತು...
Friday, March 25, 2011
ಸ್ನೇಹ...
ಆಗಸದಲಿ ಗಾಳಿಯ
ಜೊತೆಯಾದ ಮುಗಿಲಿಗೆ
ತಾರೆಗಳ ಮಾಲಿಕೆ....
ನಮ್ಮಿಬ್ಬರ ಸ್ನೇಹವನ್ನು
ಮಾಡಲಾರೆ ಸೂರ್ಯ ಚಂದ್ರರಿಗೆ
ಹೋಲಿಕೆ......
ಜೊತೆಯಾಗಿ ಓಡಾಡುತ್ತಾ
ಆಕಾಶದಲ್ಲಿ ಮುಗಿಲಾಗುವುದೆ ಇಷ್ಟಾ...
ಎಂದೂ ಜೊತೆಯಾಗದ ಗೆಳೆತನದ ಕನ್ನಡಿ
ಸೂರ್ಯ ಚಂದ್ರಾಗುವುದು ಬಲು ಕಷ್ಟ..
Thursday, March 24, 2011
ಸಾವೆಂಬ ನೋವು
ಸಾವಿನ ಮನೆಯ ಮೂಲೆಯಲ್ಲಿ ಮುದುಡಿಕೂತು.....
ಅತ್ತಿತ್ತ ಬಿರುಸಾಗಿ ತಿರುಗಾಡುವ ಜನರನ್ನು ದಿಟ್ಟಿಸುತ್ತಾ...
ಅಲ್ಲಲ್ಲಿ ಗುಂಪು ಕಟ್ಟಿ ನಿಂತು ವಿಧಿಯನ್ನು ಶಪಿಸುತ್ತಾ..
ನಿಮಿಶಕ್ಕೊಂದರಂತೆ ಬಂದು ನಿಲ್ಲುವ ಗಾಡಿಯ ಶಬ್ದವನ್ನು ಆಲಿಸುತ್ತಾ...
ಮನದೊಳಗೆ ಕಡೆಯುವ ನೋವಿನ ಮೊಸರನ್ನು
ಅದರೊಟ್ಟಿಗೆ ಬಂದ ಕಣ್ಣೀರನ್ನು ತಡೆಯುತ್ತಾ..
ಒಬ್ಬರಾದ ಮೇಲೆ ಒಬ್ಬರಂತೆ ಸಮಾಧಾನ ಮಾಡುವ ಲೆಕ್ಕದಲ್ಲಿ
ಬಂದು ಹೋಗುವ ನೆಂಟರಿಷ್ಟರೂ.....
ಗೊತ್ತು ಗೊತ್ತಿಲ್ಲದೆಯೊ ಮನಸಿನ ನೋವನ್ನು ಮತ್ತೆ ಮತ್ತೆ ಕೆಣಕಿ
ಕಣ್ಣೀರಿನ ಮೊಡುವಲ್ಲಿ ತಾನಗಿಯೆ ಮತ್ತೆ ಮತ್ತೆ ಬೀಳಲು ಸಹಕರಿಸುವರು.
ಯಾರು ಎಷ್ಟೆ ಸಹಕರಿಸಿದರೂ ಸಮುದ್ರದಲ್ಲಿ ಮುಳುಗಿದ ಹಡಗಂತೆ..
ಕಳೆದು ಹೊದ ಜೀವವನ್ನು ಮತ್ತೆ ಮರಳಿ ತರಲಾಗದು...
ಒಮ್ಮೆ ಹಣೆಬರಹವನ್ನು ಬರೆದ ದೇವರೂ ಇನ್ನೊಮ್ಮೆ ತಿದ್ದಲು ಸಾದ್ಯವೇ?
Wednesday, March 23, 2011
ಕದಡಿದ ನೆನಪು
ಹಳೆಯ ಹಾದಿಯ
ಮಾತಿಲ್ಲದ ಪಯಣ...
ಕಾಲಡಿ ಸಿಕ್ಕು ನಲುಗಿದೆ
ಮಧುರ ಯಾತನೆಗಳು....
ಇದ್ದು ಇಲ್ಲದ ನೆನಪು
ಕಾವಲಿನ ಕವಲಿಗೆ ಮುಳುವಾಗಿದೆ..
ಮನದ ಮುತ್ತಿನ ತೋರಣವ
ಹರಿದು ಛಿದ್ರ ಛಿದ್ರ ಮಾಡಿವೆ...
ಸತ್ತ ರಕ್ತದ ಕಲೆಗಳು
ಹಳೆಯ ಬಟ್ಟೆಯ ಮೇಲೆ ಮಾಸಿ...
ಭಯದ ನೆರಳಲ್ಲಿ
ಕರುಳಿನ ಸುತ್ತ ಕೋಟೆಯಾಗಿದೆ..
ನಿರಾಸೆಯ ಕರಿ ಮೋಡವು
ಕತ್ತಲಲ್ಲಿ ಇಣುಕಿ ನೋಡಿ
ಅಶಕ್ತ ವ್ರಕ್ಶದ ಬುಡಕ್ಕೆ
ನೀರೆರೆಯದೆ ಕರಗಿಹೋಗಿದೆ...
ಬಾಲಂಗೊಚಿಯು ಆಗಸದಲ್ಲಿ
ಅಣುಕಿಸಿ ನಕ್ಕಿದೆ..
ಕೂದಲೆಳೆಯ ಅಂತರದಲ್ಲಿ
ನಲಿವು ಇಲ್ಲವಾಗಿದೆ...
Thursday, March 17, 2011
ಕವಿತೆ
ನಿನ್ನೊಲವಿನ ಭಾವಕೆ
ನಾ ಮರುಳಾದೆ..
ಚಂದ್ರನಿಲ್ಲದ ಬಾನಂತೆ
ನಾ ಕರೆಗಿ ಹೋದೆ.
ಬೆಳಗಿನ ಇಬ್ಬನಿಯಂತೆ
ನೀ ಬಂದು ಸೋಕಿದಾಗ...
ಒಲೆಯೊಳಗಿನ ಕಾವಂತೆ
ನನ್ನಲ್ಲಿ ನಿ ಕವಿತೆಯಾದೆ.
Sunday, March 6, 2011
ಪ್ರಕ್ರತಿ
ಪೂರ್ವ ಪರ್ವತ ಶ್ರಂಗದಲ್ಲಿ
ಅರುಣನ ಬೆಳಕು ನಲಿದಾಡುತಿತ್ತು...\
ಜೀವ ಅಲೆಯ ಬಯಲಿನ ತಪ್ಪಲಲ್ಲಿ
ಮಂಜು ಕುಣಿದಡುತಿತ್ತು...\
ಮರೆ ಮಾಚದೆ ನಿನ್ನ ಸೌಂದರ್ಯವನ್ನು
ದಾರೆಯೆರೆಯೆ ಪ್ರಕ್ರತಿ...\
ನಿನಗಾಗಿ ಕಾದು ಬವಣಿಸಿ
ಈ ಇಳೆ ಪರಿತಪಿಸುತಿತ್ತು...\
ಬಣ್ಣದ ಲೋಕ
ಬಣ್ಣದ ಲೋಕದಲ್ಲಿ ಮೀನಿನ ಹೆಜ್ಜೆ/
ಗಳಿಗೆಯ ಮಜಲಿನಲ್ಲಿ ಕ್ಶಣದ ಗೆಜ್ಜೆ\
ಊರುಕೇರಿ ಬೆಟ್ಟ ಹೊಳೆಯ ಹಾದು...
ಜ್ವಲಿಸಿದೆ ನಿನ್ನ ಇರುವಿಕೆಯ ಚಿಹ್ನೆಯ ಲಜ್ಜೆ..\
Sunday, February 27, 2011
ಹುಸಿ ಪ್ರೀತಿ
ಬಾ ಎಂದು ಕರೆಯಲಾರೆ
ನಿನ್ನ ನಿರೀಕ್ಷೆ ನಿಲ್ಲಿಸಲಾರೆ
ನಿನ್ನ ಕಂಗಳ ಕೊಳದಲ್ಲಿ ನನ್ನ ಪ್ರತಿಬಿಂಬವನ್ನು ಕಾಣಲು
ವ್ರಕ್ಷ ಸಿರಿಯ ಗೂಡಲ್ಲಿ ಅಡಗಿದ ಗುಬ್ಬಿಯಂತೆ ಕಾಯುತಿರುವೆ.
ಕನಸಿನ ಲೋಕದ ಸುಖದ ಸೆತುವೆಯ ಮೇಲೆ..
ನಿನ್ನ ಕಾಲಿನ ಮಣ್ಣಿನ ದೂಳಿನ ಕಾವು..
ನನ್ನ ಎದೆಯಾಲದಲ್ಲಿ ಬಿತ್ತಿದೆ ನೀನು
ಮಾಯದ ಒಲವಿನ ಗಾಯದ ನೋವು..
ಹೇಗೆ ಮರೆಯಲಿ ಹುಡುಗಿ ನಿನ್ನ ಹುಡುಗಾಟವ..
ಬತ್ತಿದ ಹ್ರದಯದಲ್ಲಿ ಉಸಿರಾದ ನಿನ್ನ ಹುಸಿ ಪ್ರೀತಿಯ..
ಶುಭೋದಯ
ಪರ್ವ ಸಾಲಿಗೆ ಉದಯ ರಶ್ಮಿಯ
ಚಿನ್ನದ ತಡಿಕೆ......
ಪುಷ್ಪಗಳ ಒಡಲಿಗೆ ಮಂಜಿನ
ಚಪ್ಪರದ ಹೊದಿಕೆ.......
ಚಿಗುರಿದ ಚಿಗುರಿಗೆ
ಇಬ್ಬನಿಯ ತೋರಿಕೆ....
ಇಳೆಯ ಮುಖದಲ್ಲಿ
ನಗುವ ನಲಿವಿನ ಸಾರಿಕೆ...
ಶುಭೋದಯ................
ದೂರದ ಭಾವ
ಇರುಳ ಕತ್ತಲಲ್ಲಿ ನೀ ಬಂದು ಸರಿದಂತೆ....
ಸಮುದ್ರ ದಂಡೆಯ ಕಂಡು ಕಾಣದ ಮರೀಚಿಕೆಯಂತೆ...
ತುಂಬಾ ಸತಾಯಿಸದೆ ನಿ ಬಂದು ನನ್ನ ಸೇರು....
ನಿಜವಾದ ನಲ್ಮೆಯ ಬಾಳ ಸ್ನೆಹಿತನಂತೆ.........
ಶ್ರಧ್ದಾಂಜಲಿ -ತಿಲಾಂಜಲಿ
ಜೀವ ಸವೆದು,
ಆತ್ಮ ತೊರೆದು ಹೋದ ದೇಹಕೆ../
ಅರ್ಪಿಸುವುದು ಅನಿವಾರ್ಯವಿದೆಯೇ...
ಈ ಭಾವಪೂರ್ಣ ಶ್ರಧ್ದಾಂಜಲಿ../
ಅಳಿದು ಹೋದ ನೆರಳನ್ನು..
ನೆನಪಿಸುತ್ತಾ ತಾನು ಉತ್ತಮನಾಗುವ../
ಮನುಜ ಪ್ರಕೃತಿಗೆ
ಇಡಲೆ ಬೇಕು ತಿಲಾಂಜಲಿ.../
ಆತ್ಮ ತೊರೆದು ಹೋದ ದೇಹಕೆ../
ಅರ್ಪಿಸುವುದು ಅನಿವಾರ್ಯವಿದೆಯೇ...
ಈ ಭಾವಪೂರ್ಣ ಶ್ರಧ್ದಾಂಜಲಿ../
ಅಳಿದು ಹೋದ ನೆರಳನ್ನು..
ನೆನಪಿಸುತ್ತಾ ತಾನು ಉತ್ತಮನಾಗುವ../
ಮನುಜ ಪ್ರಕೃತಿಗೆ
ಇಡಲೆ ಬೇಕು ತಿಲಾಂಜಲಿ.../
Subscribe to:
Posts (Atom)